1998ನೇ ಸಾಲಿನ 383 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿಯಲ್ಲಿ ನಡೆದ ‘ಅಕ್ರಮ’ಗಳನ್ನು ಸಕ್ರಮಗೊಳಿಸುವ ಉದ್ದೇಶದ ಸುಗ್ರೀವಾಜ್ಞೆಗೆ ಅಂಕಿತ ಹಾಕಲು ರಾಜ್ಯಪಾಲರುನಿರಾಕರಿಸಿರುವುದು (ಪ್ರ.ವಾ., ಜೂನ್ 17)ನ್ಯಾಯೋಚಿತ ನಿರ್ಧಾರ. ಸರ್ಕಾರ ವಿವೇಚನೆ ಮರೆತು ಸುಗ್ರೀವಾಜ್ಞೆ ತರಲು ಮುಂದಾದಾಗ, ಅದಕ್ಕೆ ತಡೆಯೊಡ್ಡುವುದು ರಾಜ್ಯಪಾಲರ ಕರ್ತವ್ಯ. ರಾಜ್ಯಪಾಲರು ತಮ್ಮ ಈ ನಿರ್ಧಾರವನ್ನು ಯಾವುದೇ ಕಾರಣಕ್ಕೂ ಬದಲಿಸಬಾರದು.