ಈಗಲೂ ದೇಶದ ಹಲವೆಡೆ ಕೋಮು ಘರ್ಷಣೆಗಳು, ಮಹಿಳೆಯರ ಮೇಲೆ ಅತ್ಯಾಚಾರಗಳು, ದಲಿತರ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ. ಕಾಶ್ಮೀರ ಕಣಿವೆಯಲ್ಲಿ ಹಿಂದೂ ಅಲ್ಪಸಂಖ್ಯಾತ ಪಂಡಿತ ವರ್ಗ ಅಭದ್ರತೆ ಎದುರಿಸುತ್ತಿದೆ. ಪ್ರಸ್ತುತ ದೇಶದಲ್ಲಿ ಕಿಡಿ ಹಾರಿಸುವ ಕೋಮು ಗಲಭೆಗಳನ್ನು ಆರಂಭದಲ್ಲೇ ಚಿವುಟಿಹಾಕಿ, ಮಸೀದಿಗಳಲ್ಲಿ ಮಂದಿರದ ತಡಕಾಟವನ್ನು ನಿಲ್ಲಿಸಿ, ಶಾಂತಿ ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳುವತ್ತ ಸರ್ಕಾರವು ದೃಢ ಹೆಜ್ಜೆ ಇಡಬೇಕು. ತಾತ್ಪರ್ಯ, ಯಾವ ಕಾರಣಕ್ಕೂ ರಾಜಕೀಯದಲ್ಲಿ ಧರ್ಮ ಬೆರೆಯಬಾರದು. ಆಗ ಪ್ರತಿಪಕ್ಷಗಳು ತಾವಾಗಿಯೇ ಬಲಗೊಳ್ಳುತ್ತವೆ, ಜನತಂತ್ರ ಗಟ್ಟಿಗೊಳ್ಳುತ್ತದೆ ಮತ್ತು ಅಚ್ಛೇ ದಿನ ಬಂದೇ ಬರುತ್ತದೆ.