ಪರಿವಾರ ರಾಜಕಾರಣ ಕುರಿತಂತೆ ನೆಹರೂ– ಗಾಂಧಿ ಕುಟುಂಬವನ್ನು ಇನ್ನಿಲ್ಲದಂತೆ ರಾಜ್ಯದಲ್ಲಿ ಟೀಕಿಸಲಾಗುತ್ತಿದೆ. ಹೀಗೆ ನೆಹರೂ– ಗಾಂಧಿ ಕುಟುಂಬದ ರಾಜಕಾರಣವನ್ನು ಟೀಕಿಸುವ ಬಿಜೆಪಿ ಮಂದಿಗೆ ತಮ್ಮ ಮನೆಯೊಳಗಣ ಕುಟುಂಬ ರಾಜಕಾರಣ ಕಾಣುವುದಿಲ್ಲ, ಏಕೆ? ಬಿಡಿಎ ವಸತಿ ಯೋಜನೆಗೆ ಸಂಬಂಧಿಸಿದಂತೆ ಮುಖಂಡ ಬಿ.ಎಸ್.ಯಡಿಯೂರಪ್ಪ, ಮಗ ವಿಜಯೇಂದ್ರ, ಅಳಿಯ ವಿರೂಪಾಕ್ಷಪ್ಪ ಯಮಕನಮರಡಿ, ಅವರ ಮಗ ಶಶಿಧರ ಮರಡಿ, ವಿರೂಪಾಕ್ಷಪ್ಪ ಅವರ ಅಳಿಯ ಸಂಜಯ್ ಹಾಗೂ ಇತರರ ಮೇಲೆ ಎಫ್ಐಆರ್ ದಾಖಲಾಗಿದೆ. ಇವರೆಲ್ಲ ಈಗ ಆರೋಪಿಗಳು.