ಪ್ರಸಕ್ತ ಹಂಗಾಮಿನಲ್ಲಿ ಶೇ 88ರಷ್ಟು ಕೃಷಿಭೂಮಿ ಬಿತ್ತನೆಯಾಗಿರುವುದು (ಪ್ರ.ವಾ., ಜುಲೈ 17) ಸಂತಸದ ಸಂಗತಿ. ವಲಸೆ ಕಾರ್ಮಿಕರೆಲ್ಲಾ ಊರು ಸೇರಿ, ಪಾಳು ಬಿದ್ದ ತಮ್ಮ ನೆಲಕ್ಕೆ ಮತ್ತೆ ಜೀವ ತುಂಬುತ್ತಿದ್ದಾರೆ. ಲಾಕ್ಡೌನ್ ಸಮಯದಲ್ಲೂ ರೈತ ಸಾಲ ಸೋಲ ಮಾಡಿ ಬೆಳೆ ಬಿತ್ತಿದ್ದಾನೆ. ಆದರೆ ಹೀಗೆ ಬಿತ್ತುವಾಗಿನ ಅವನ ಸಂಭ್ರಮ ಮಾರುವವರೆಗೂ ಉಳಿಯುತ್ತದೆಯೇ ಎಂಬುದೇ ಅನುಮಾನ. ಬಹುಪಾಲು ಕೃಷಿ ಬಿತ್ತನೆಯಾಗಿರುವುದರಿಂದ ಫಸಲು ಹೆಚ್ಚಾಗುತ್ತದೆ. ಎಲ್ಲರೂ ಏಕಕಾಲಕ್ಕೆ ಕಟಾವು ಮಾಡಿದ ಬೆಳೆಗಳು ಮಾರುಕಟ್ಟೆಯನ್ನು ಪ್ರವೇಶಿಸಿದಾಗ ದಲ್ಲಾಳಿಗಳ ಅಬ್ಬರವೂ ಹೆಚ್ಚಾಗಿ, ತಾನು ಖರ್ಚು ಮಾಡಿದ ಹಣ ಮರಳಿ ಪಡೆಯದೆ ರೈತ ಸಾಲ ತೀರಿಸಲಾಗದೆ ಹತಾಶನಾಗುತ್ತಾನೆ.