ಪಾಲಿಕೆಯ ಬಿಜೆಪಿ ಸದಸ್ಯ ಡಿ.ಕೆ. ಕುಮಾರ್, ‘ರಾಜೀನಾಮೆ ನೀಡಲು ಅರ್ಧ ಗಂಟೆ ಸಾಕು. ಆದರೆ, ಮೂರು ದಿನಗಳಿಂದ ಬೆಂಗಳೂರಿನಲ್ಲಿ ಬೀಡು ಬಿಟ್ಟಿರುವ ಪಾಲಿಕೆ ಕಾಂಗ್ರೆಸ್ ಸದಸ್ಯರು, ಕೆಪಿಸಿಸಿ ಅಧ್ಯಕ್ಷರಿಗೆ ರಾಜೀನಾಮೆ ನೀಡಿರುವುದೇ ನಾಟಕ. ಅವರು ಹೋಗಿರುವುದು ರಾಜೀನಾಮೆ ಕೊಡುವುದಕ್ಕಲ್ಲ; ಪ್ರವಾಸ ಮಾಡಲಿಕ್ಕೆ’ ಎಂದು ಟೀಕಿಸಿದರು.