ಕರ್ನಾಟಕ ಕೃಷಿ ಬೆಲೆ ಆಯೋಗ ಮತ್ತು ಕೃಷಿ ಇಲಾಖೆಯು ವಿಶೇಷ ಸಮಿತಿ ರಚಿಸಿ, ರಾಜಮುಡಿ ಭತ್ತದ ತಳಿಗೆ ಭೌಗೋಳಿಕ ಗುರುತು ಪಡೆಯಲು ಹೊರಟಿರುವುದು ಸಂತಸದ ವಿಚಾರ. ಹಾಗೆಯೇ, ಅವನತಿಯ ಅಂಚಿನಲ್ಲಿರುವ ಇನ್ನೂ ಹಲವಾರು ವಿಶಿಷ್ಟ ತಳಿಗಳನ್ನು ಗುರುತಿಸಿ, ಇದೇ ರೀತಿ ಭೌಗೋಳಿಕವಾಗಿ ಗುರುತಿಸುವಂತೆ ಮಾಡಬೇಕಾಗಿದೆ. ಆಗ ಆ ವಿಶಿಷ್ಟ ತಳಿಗಳು ಮುಂದಿನ ಪೀಳಿಗೆಗೂ ದೊರೆಯುವಂತಾಗುತ್ತವೆ. ಅಲ್ಲದೆ, ಇಂತಹ ತಳಿಗಳ ಸಂರಕ್ಷಣಾ ಕಾರ್ಯದಲ್ಲಿ ತೊಡಗಿರುವ ಹಲವಾರು ರೈತರಿಗೂ ಪ್ರೋತ್ಸಾಹ
ನೀಡಿದಂತಾಗುತ್ತದೆ.