ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರ ಬಳಿ ಹಣ ಸುಳಿದಾಡುವಂತೆ ಮಾಡಿ

Last Updated 3 ಸೆಪ್ಟೆಂಬರ್ 2019, 8:53 IST
ಅಕ್ಷರ ಗಾತ್ರ

ಆರ್ಥಿಕ ತಜ್ಞರ ವಿರೋಧದ ನಡುವೆಯೂ ನೋಟು ಅಮಾನ್ಯೀಕರಣ ಮತ್ತು ಜಿಎಸ್‌ಟಿಯಂತಹ ನೀತಿಗಳನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದ್ದರ ಪರಿಣಾಮವಾಗಿ, ಇಂದು ಗ್ರಾಹಕರು ಕೊಳ್ಳುವ ಶಕ್ತಿಯನ್ನು ಕಳೆದುಕೊಳ್ಳುತ್ತಿದ್ದಾರೆ. ಕೈಗಾರಿಕೆಗಳು, ಜವಳಿ ಉದ್ಯಮಗಳು ಬಾಗಿಲು ಮುಚ್ಚುವ ಹಂತಕ್ಕೆ ಬಂದಿದ್ದರೂ ಸರ್ಕಾರ ದೃಢ ನಿರ್ಧಾರ ತೆಗೆದುಕೊಳ್ಳುವಲ್ಲಿ ವಿಫಲವಾಗುತ್ತಿದೆ. ಇದು ಹೀಗೇ ಮುಂದುವರಿದರೆ, ಕೈಗಾರಿಕೆಗಳನ್ನು ಅವಲಂಬಿಸಿರುವ ಯುವಜನರ ಬದುಕು ಬೀದಿಪಾಲಾಗುತ್ತದೆ. ಆಗ ಸರ್ಕಾರವೇ ಅದಕ್ಕೆ ನೇರ ಹೊಣೆಯಾಗಬೇಕಾಗುತ್ತದೆ.

ಪ್ರಸ್ತುತ ಆರ್ಥಿಕ ಹಿಂಜರಿತವು ನಮ್ಮ ಮುಂದಿರುವ ಸವಾಲಾಗಿರುವುದರಿಂದ, ಸರ್ಕಾರವು ಆರ್‌ಬಿಐನಿಂದ ಪಡೆದಿರುವ ಮೀಸಲು ನಿಧಿಯ ಹೆಚ್ಚುವರಿ ಮೊತ್ತವನ್ನು ನಷ್ಟದ ಸುಳಿಯಲ್ಲಿ ಸಿಲುಕಿರುವ ವಲಯಗಳ ಚೇತರಿಕೆಗೆ ಬಳಸಬೇಕು. ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಿಗೆ ಪುನರ್ಧನ ಒದಗಿಸಬೇಕು. ಕಡಿಮೆ ಬಡ್ಡಿ ದರದಲ್ಲಿ ವಾಹನ ಖರೀದಿ ಸಾಲ ಹಾಗೂ ಗೃಹ ಸಾಲ ಸಿಗುವಂತೆ ಮಾಡಬೇಕು. ಈ ಮುಖಾಂತರ ಜನರ ಬಳಿ ದುಡ್ಡು ಸುಳಿದಾಡುವಂತೆ ಮಾಡಿ, ಆರ್ಥಿಕತೆ ಚೇತರಿಸಿಕೊಳ್ಳುವಂತೆ ನೋಡಿಕೊಳ್ಳಬೇಕು.

–ನಾಗರಾಜ್ ಗರಗ್,ಹೊಸದುರ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT