ಅರ್ಥಾತ್ ಹೊಸ ನಗರಗಳನ್ನೇ ನಿರ್ಮಿಸಬೇಕು. ಅಲ್ಲಿ ಮಧ್ಯೆ ಮಧ್ಯೆ ರಸ್ತೆ ಅಗೆತ, ಹೊಸ ಸೇತುವೆ ನಿರ್ಮಾಣ, ಸುರಂಗ ಗುಂಡಿ, ಚರಂಡಿ ರಿಪೇರಿ, ಕೇಬಲ್ ಎಳೆತ ಇತ್ಯಾದಿಗಳಿಗೆ ಎಂದೂ ಅವಕಾಶ ಇಲ್ಲದಂತೆ ಮೊದಲೇ ಪ್ಲಾನ್ ಮಾಡಬೇಕು. ಅಲ್ಲಿ ಪ್ರತಿಭಟನಾ ಮೆರವಣಿಗೆ, ಗಣಪನ ವಿಸರ್ಜನೆ, ಗಣ್ಯರ ರೊಯ್ ಎಂಬ ಓಡಾಟ, ಪೆಟ್ರೋಲಿಗೆ ಕ್ಯೂ ಇವೆಲ್ಲ ಇರಕೂಡದು. ಆಗ ನಾನು ಹೊಸ ವಾಹನ ಖರೀದಿ ಮಾಡಲು ಮನಸ್ಸು ಮಾಡುತ್ತೇನೆ. ಮುಂದಿನ ಚುನಾವಣೆಯ ಒಳಗೆ ಅವೆಲ್ಲ ಸಾಧ್ಯವೇ?