ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀನುಗಾರರ ನಾಪತ್ತೆ: ಗಂಭೀರವಾಗಿ ಪರಿಗಣಿಸಲಿ

Last Updated 18 ಜನವರಿ 2019, 19:45 IST
ಅಕ್ಷರ ಗಾತ್ರ

ಒಂದು ತಿಂಗಳ ಹಿಂದೆ ನಮ್ಮ ಕರಾವಳಿ ಭಾಗದಿಂದ ನಾಪತ್ತೆಯಾದ ಸುವರ್ಣ ತ್ರಿಭುಜ ಯಾಂತ್ರೀಕೃತ ದೋಣಿ ಹಾಗೂ 7 ಮೀನುಗಾರರ ಸುಳಿವು ಇನ್ನೂ ಅಲಭ್ಯವಾಗಿದೆ. ನೌಕಾಪಡೆಯ ಹಡಗುಗಳು ಮಹಾರಾಷ್ಟ್ರ, ಗೋವಾ ಸೇರಿದಂತೆ ಸಮುದ್ರದ ತಳಮಟ್ಟದಲ್ಲೂ ಹಲವಾರು ದಿನಗಳಿಂದ ತೀವ್ರ ಶೋಧ ನಡೆಸಿದರೂ ಪ್ರಯೋಜನವಾಗಿಲ್ಲ. ಕಡಲ್ಗಳ್ಳರ ಹಾವಳಿ, ಉಗ್ರರ ಭೀತಿ ಜೊತೆಗೆ ಅಕ್ರಮ ನುಸುಳುವಿಕೆಗಳು ಪ್ರಮುಖವಾಗಿ ಸಮುದ್ರ ಮಾರ್ಗದಿಂದಲೇ ನಡೆದಿರುವ ಉದಾಹರಣೆಗಳಿವೆ. ಹೀಗಾಗಿ, ದೋಣಿ ಆಳ ಸಮುದ್ರದಲ್ಲಿ ಅವಘಡಕ್ಕೆ ತುತ್ತಾಗಿರುವ, ಇಲ್ಲವೇ ಉಗ್ರರು ಅಪಹರಿಸಿ ವಿಧ್ವಂಸಕ ಕೃತ್ಯಕ್ಕೆ ಬಳಸಿರುವ ಶಂಕೆಗಳು ಬಲವಾಗಿ ವ್ಯಕ್ತವಾಗುತ್ತಿವೆ.

ನಾಪತ್ತೆಯಾಗಿರುವ ಮೀನುಗಾರರ ಕುಟುಂಬಸ್ಥರು ಆತಂಕದಿಂದಲೇ ದಿನ ದೂಡುವಂತಾಗಿದೆ. ಜೀವದ ಹಂಗು ತೊರೆದು ಮೀನುಗಾರಿಕೆ ವೃತ್ತಿ ನಡೆಸುವ,ಒಂದರ್ಥದಲ್ಲಿ ಕಡಲತಡಿಯನ್ನು ಕಾಯುವ ಸೈನಿಕರೆಂದೇ ಕರೆಯಲಾಗುವ ಕಡಲ ಮಕ್ಕಳ ನಾಪತ್ತೆ ಪ್ರಕರಣವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಗಂಭೀರವಾಗಿ ಪರಿಗಣಿಸಬೇಕು.

–ಆದರ್ಶ್ ಶೆಟ್ಟಿ,ಉಪ್ಪಿನಂಗಡಿ, ಪುತ್ತೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT