ರಾಜ್ಯದ ಗೋದಾಮುಗಳಲ್ಲಿ ಟನ್ಗಟ್ಟಲೆ ಆಹಾರಧಾನ್ಯ ಕೊಳೆಯುತ್ತಿದೆ ಎಂಬ ಸುದ್ದಿ ಓದಿ (ಪ್ರ.ವಾ., ನ. 5) ಕಣ್ಣೀರು ಬಂತು. ಶಾಲೆಗಳಲ್ಲಿ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ನೀಡುವ ಸಲುವಾಗಿ ಸಂಗ್ರಹಿಸಿ ಇಟ್ಟಿದ್ದ ಆಹಾರಧಾನ್ಯ ಕೊಳೆಯುತ್ತಿರುವುದು, ಉತ್ತರ ಕರ್ನಾಟಕ ಭಾಗದಲ್ಲಿ ಅತಿವೃಷ್ಟಿಯಿಂದ ತತ್ತರಿಸಿ ತುತ್ತು ಅನ್ನಕ್ಕೂ ಪರದಾಡುತ್ತಿರುವ ಸಂತ್ರಸ್ತರ ಹಸಿವು ನೀಗಿಸಲೂ ಅದು ಬಳಕೆಯಾಗದೇ ಹೋದದ್ದು ದುರದೃಷ್ಟಕರ. ಈಗ ಶಾಲೆಗಳು ಪ್ರಾರಂಭವಾದರೆ ಮತ್ತೆ ಹೊಸದಾಗಿ ಆಹಾರಧಾನ್ಯಗಳ ಸರಬರಾಜು ಪ್ರಾರಂಭವಾಗುತ್ತದೆ. ಹಳೆಯದನ್ನೆಲ್ಲ ತಿಪ್ಪೆಗೆ ಸುರಿದು ನಾವು ಸಾಧಿಸುವುದಾದರೂ ಏನನ್ನು?