ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಣ್ಯವೆಂದರೆ ಗಿಡಮರಗಳ ಸಮೂಹವೇ?

Last Updated 2 ಜನವರಿ 2020, 23:45 IST
ಅಕ್ಷರ ಗಾತ್ರ

ಕರ್ನಾಟಕದಲ್ಲಿ ವನಪ್ರದೇಶದ ವಿಸ್ತೀರ್ಣ ಹೆಚ್ಚಾಗಿದೆ ಎಂಬ ವರದಿ‌ ಓದಿದೆ (ಪ್ರ.ವಾ., ಡಿ. 30). ಆದರೆ ಅರಣ್ಯ ಪ್ರದೇಶದ ವಿಸ್ತೀರ್ಣವನ್ನು ಅಳೆಯುವಾಗ ಕಾಫಿ ತೋಟಗಳು, ರಬ್ಬರ್ ತೋಟಗಳನ್ನು ಪರಿಗಣಿಸಿರುವುದು‌‌ ಸರಿಯಲ್ಲ. ಇಲ್ಲಿ ಅರಣ್ಯದ ವ್ಯಾಖ್ಯಾನವೇ ಬದಲಾದಂತಿದೆ. ಅರಣ್ಯವೆಂದರೆ ಕೇವಲ ಗಿಡಮರಗಳ ಸಮೂಹವೇ?

ಒಂದು ಪ್ರದೇಶದಲ್ಲಿ ವಿವಿಧ ಜಾತಿಯ ಗಿಡಮರಗಳು, ಬಳ್ಳಿಗಳು ಬೆಳೆದಿರಬೇಕು. ಅವುಗಳನ್ನು ಅವಲಂಬಿಸಿ ಬ್ಯಾಕ್ಟೀರಿಯಾಗಳು, ಕೀಟಗಳು, ಚಿಟ್ಟೆಗಳು, ಪಕ್ಷಿಗಳು, ಪ್ರಾಣಿಗಳು... ಹೀಗೆ ಒಂದು ದೊಡ್ಡ ಜೀವಸರಪಳಿಯೇ ಅಲ್ಲಿ ನೆಲೆಸಿರಬೇಕು. ಅಜೈವಿಕ ಅಂಶಗಳಾದ ಬೆಟ್ಟ ಗುಡ್ಡ, ನೀರಿನ ತೊರೆ ಝರಿಗಳೂ ಇರಬೇಕು. ಇಂತಹ ಪ್ರದೇಶದಲ್ಲಿ ಮಾನವನ ಹಸ್ತಕ್ಷೇಪ ಇರಬಾರದು.

ಹೀಗೆ ಜೈವಿಕ-ಅಜೈವಿಕ ಘಟಕಗಳ ಸಮೂಹ ಪ್ರದೇಶವನ್ನು ಅರಣ್ಯ ಎನ್ನಬಹುದು. ಆದರೆ ರಬ್ಬರ್ ಅಥವಾ ಕಾಫಿ ತೋಟಗಳಲ್ಲಿ ಈ ತರಹದ ಪರಿಸರ ಇರುವುದಿಲ್ಲ. ಇಲ್ಲಿ ಒಂದೇ ಜಾತಿಯ ವಾಣಿಜ್ಯ ಬೆಳೆಗಳನ್ನು ಬೆಳೆಯಲಾಗಿರುತ್ತದೆ. ಮಾನವನಿರ್ಮಿತ ತೋಟಗಳಿಗೂ ನಿಸರ್ಗನಿರ್ಮಿತ‌ ಅರಣ್ಯಕ್ಕೂ ಅಜಗಜಾಂತರ ಇದೆ. ಆದ್ದರಿಂದ ಕರ್ನಾಟಕದಲ್ಲಿ ಆಗಿರುವುದು ಹಸಿರಿನ‌ ಹೊದಿಕೆಯಲ್ಲಿ ಹೆಚ್ಚಳ‌.

-ಮಹೇಶ್ವರ ಹುರುಕಡ್ಲಿ,ಬಾಚಿಗೊಂಡನಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT