ಸಂವಿಧಾನದಲ್ಲಿ ಅಳವಡಿಕೆಯಾಗಿರುವ ಮೂಲಭೂತ ಕರ್ತವ್ಯಗಳಲ್ಲಿನ ಒಂದು ಕರ್ತವ್ಯ ಹೀಗಿದೆ: ‘ಅರಣ್ಯಗಳು, ಸರೋವರಗಳು, ನದಿಗಳು ಮತ್ತು ವನ್ಯಜೀವಿಗಳು ಸೇರಿದಂತೆ ನೈಸರ್ಗಿಕ ಪರಿಸರವನ್ನು ಸಂರಕ್ಷಿಸುವುದು, ಅಭಿವೃದ್ಧಿಗೊಳಿಸುವುದು ಮತ್ತು ಪ್ರಾಣಿಗಳಿಗೆ ಅನುಕಂಪ ತೋರಿಸುವುದು’. ಆದರೆ, ಇದು ಪ್ರಜೆಗಳು, ಪ್ರಭುಗಳು ಮತ್ತು ಅಧಿಕಾರಶಾಹಿಗೆ ಅರ್ಥವಾದಂತೆ ತೋರುತ್ತಿಲ್ಲ.