ಪಠ್ಯಪುಸ್ತಕ ಗಲಾಟೆಯ ನಡುವೆ ಬಂದ ‘ಕರ್ನಾಟಕದ ಕಾಡಿನ ಸ್ವರೂಪ ಬದಲು’ ಎಂಬ ವಿಶ್ಲೇಷಣಾತ್ಮಕ ಲೇಖನ (ಪ್ರ.ವಾ., ಜೂನ್ 6) ಆತಂಕ ಹುಟ್ಟಿಸುವಂತಿದೆ. 60 ಸೆಂ.ಮೀ.ಗಿಂತಲೂ ಹೆಚ್ಚು ಕಾಂಡದ ಸುತ್ತಳತೆ ಇರುವ ಬೃಹತ್ ಮರಗಳ ಪ್ರದೇಶ ಹೆಚ್ಚಿದೆ, ಪೊದೆ, ಕಳೆ ಸಸ್ಯಗಳದು ಶೇ 50ರಷ್ಟು ಕಡಿಮೆಯಾಗಿದೆ... ಇದು ಕೊರೊನಾ ಕಾಲದಲ್ಲಿ ಆರ್ಥಿಕವಾಗಿ ಯಾವ್ಯಾವ ವರ್ಗಗಳಿಗೆ ಏನಾಯಿತು ಎಂಬ ವಿಶ್ಲೇಷಣೆಯನ್ನು ಹೋಲುತ್ತದೆ. ಬಿದಿರಿನ ಪ್ರದೇಶದಲ್ಲಿ ಆಗಿರುವ ಇಳಿಕೆ (ಶೇ 15) ಆಳುವವರ ಕಣ್ತೆರೆಸಬೇಕು.