ಇಂತಹ ಶಿಷ್ಟಾಚಾರಗಳಿಂದ ಅನೇಕ ಸಂದರ್ಭಗಳಲ್ಲಿ ಅಧಿಕಾರಿಗಳಿಗೆ ಕಿರಿಕಿರಿ ಉಂಟಾಗುತ್ತದೆ. ಲಾಠಿಚಾರ್ಜ್, ಗೋಲಿಬಾರ್ ಹಾಗೂ ಸಾವಿಗೂ ಕಾರಣವಾಗಿದ್ದಿದೆ. ರಾಜಕಾರಣಿಗಳ ನಡುವೆ ಸಿಲುಕಿಕೊಂಡ ಅಧಿಕಾರಿಯನ್ನು ಹೊಣೆ ಮಾಡಿದ ಪ್ರಸಂಗಗಳೂ ನಡೆದಿವೆ. ಸರ್ಕಾರ ಈಗಲಾದರೂ ಈ ಹಿಂದಿನ ಎಲ್ಲ ಸುತ್ತೋಲೆಗಳು ಮತ್ತು ಇಂದಿನ ಪರಿಸ್ಥಿತಿಯನ್ನು ಗಮನಿಸಿ, ಅನುಷ್ಠಾನಯೋಗ್ಯವಾದ ಸಮಗ್ರ ಶಿಷ್ಟಾಚಾರ ನಿಯಮವನ್ನು ರೂಪಿಸಲಿ.