ಕಳೆದ ವಾರಾಂತ್ಯದಲ್ಲಿ ಅರಣ್ಯ ಇಲಾಖೆಯ ವತಿಯಿಂದ ಸಾಗರ ಸನಿಹದ ‘ಮುಪ್ಪಾನೆ ಪ್ರಕೃತಿ ಶಿಬಿರ’ದಲ್ಲಿ ದೇಶದ ಪ್ರಥಮ ‘ಕಪ್ಪೆಹಬ್ಬ’ವನ್ನು ಅದ್ಧೂರಿಯಾಗಿ ಆಚರಿಸಲಾಯಿತು ಎಂದು ವರದಿಯಾಗಿದೆ (ಪ್ರ.ವಾ., ಡಿ. 20). ಅಚ್ಚರಿಯೆಂದರೆ, ಈ ಕಾರ್ಯಕ್ರಮಗಳಿಗೆ ಕೇವಲ ಅಂತರ್ಜಾಲದಲ್ಲಿ ಪ್ರವೇಶ ಪಡೆದವರಿಗಷ್ಟೇ ಅವಕಾಶ ನೀಡಲಾಗಿತ್ತು! ಸ್ಥಳೀಯರು, ಪರಿಸರಪ್ರಿಯರು ಭಾಗವಹಿಸುವುದಕ್ಕೆ ನಿರ್ಬಂಧವಿತ್ತು. ಸ್ಥಳೀಯರಿಗೇ ಅವಕಾಶವಿಲ್ಲವಾದರೆ ಅದನ್ನು ಬೆಂಗಳೂರಿನ ಕಾಂಕ್ರೀಟ್ ಕಾಡಿನಲ್ಲಿಯೇ ಮಾಡಬಹುದಿತ್ತು. ಅಷ್ಟು ದೂರದ ಸಾಗರದಲ್ಲಿ ಆಯೋಜಿಸುವ ಅವಶ್ಯಕತೆಯೇ ಇರಲಿಲ್ಲ. ಸ್ಥಳೀಯರನ್ನು ಅವಗಣಿಸುವುದರಿಂದಲೇ ಅರಣ್ಯ ಇಲಾಖೆಯ ಯೋಜನೆಗಳು ಸಂಪೂರ್ಣ ಯಶಸ್ಸು ಪಡೆಯುವುದಿಲ್ಲ.