‘ಗಾಂಧಿ ಬಜಾರ್ನಲ್ಲಿ ಏಕಾಂಕ!’ ಎಂಬ ರವೀಂದ್ರ ಭಟ್ಟರ ಲೇಖನವು (ಪ್ರ.ವಾ., ಆ. 27) ಕಾಂಗ್ರೆಸ್ ಪಕ್ಷದ ಇಂದಿನ ದುಃಸ್ಥಿತಿಗೆ ಕನ್ನಡಿ ಹಿಡಿದಂತಿದೆ. ಒಂದೇ ಕುಟುಂಬದ ಅಥವಾ ವ್ಯಕ್ತಿಯ ಅಧೀನಕ್ಕೊಳಪಟ್ಟ ಯಾವುದೇ ಪಕ್ಷ ಹೆಚ್ಚು ಕಾಲ ಬಾಳಲಾಗದು. ನಾಯಕ ಕೇಂದ್ರಿತವಾಗುತ್ತಿರುವ ಭಾರತದ ಇಂದಿನ ರಾಜಕಾರಣದ ಪರಿಸ್ಥಿತಿಯಲ್ಲಿ, ಸಮರ್ಥ ನಾಯಕನೊಬ್ಬನನ್ನು ಹುಡುಕಿಕೊಳ್ಳದಿದ್ದರೆ ಪಕ್ಷ ಇನ್ನಷ್ಟು ಅವನತಿಗೆ ಹೋಗಲಿದೆ.