ವಿಘ್ನ ನಿವಾರಿಸಲೆಂದು ಪೂಜಿಸುವ ಹಬ್ಬದಿಂದ ವಿಘ್ನಗಳುಂಟಾಗದಂತೆ ಎಚ್ಚರ ವಹಿಸುವುದು ನಮ್ಮೆಲ್ಲರ ಹೊಣೆ. ಪರಿಸರಸ್ನೇಹಿ ಮೂರ್ತಿಯನ್ನು ಪೂಜಿಸುವ ಮೂಲಕ ಹಬ್ಬ ಆಚರಿಸಬೇಕು. ನೈಸರ್ಗಿಕ ಅಲಂಕಾರ ಶ್ರೇಷ್ಠವಾದ್ದರಿಂದ ಪರಿಸರಸ್ನೇಹಿ ವಸ್ತುಗಳನ್ನೇ ಗಣೇಶನ ಅಲಂಕಾರಕ್ಕೆ ಬಳಸಬೇಕು. ಮೂರ್ತಿ ವಿಸರ್ಜಿಸುವ ಮುನ್ನ ವಿಗ್ರಹದ ಮೇಲಿನ ಹೂ, ವಸ್ತ್ರ, ಹಾರಗಳನ್ನು ತೆಗೆದು ವಿಸರ್ಜಿಸಬೇಕು. ಮಾಲಿನ್ಯಕ್ಕೆ ಆಸ್ಪದವಾಗದಂತೆ ನೋಡಿಕೊಳ್ಳಬೇಕು.