ಮುಖ್ಯಮಂತ್ರಿ ಯಡಿಯೂರಪ್ಪ ಅಧಿಕಾರಕ್ಕೆ ಬಂದ ನಂತರ ಮಾಡಿದ ಮುಖ್ಯ ಆದೇಶಗಳಲ್ಲಿ, ಬೆಂಗಳೂರಿನ ಕಸ ವಿಲೇವಾರಿಗೆ ಸೂಚನೆ ನೀಡಿದ್ದೂ ಒಂದು. ಕಸ ವಿಲೇವಾರಿ ಸಮಸ್ಯೆಯ ಅಗಾಧತೆಯನ್ನು ಇದರಿಂದ ಊಹಿಸಬಹುದು. ಈ ಸಮಸ್ಯೆ ಬೆಂಗಳೂರಿಗಷ್ಟೇ ಸೀಮಿತವಾಗಿಲ್ಲ. ರಾಜ್ಯದ ಪ್ರತಿ ಪಟ್ಟಣ, ನಗರವೂ ಈ ಸಮಸ್ಯೆ ಅನುಭವಿಸುತ್ತಿವೆ. ಕಸ ವಿಲೇವಾರಿಗೆ ಸರ್ಕಾರ ಗಂಭೀರ ಯೋಜನೆಗಳನ್ನು ಕಾರ್ಯಗತಗೊಳಿಸದಿದ್ದರೆ ಕಸ ನಿರ್ವಹಣೆಗೆ ಒಬ್ಬ ಮಂತ್ರಿಯನ್ನೇ ನೇಮಕ ಮಾಡಬೇಕಾಗುತ್ತದೆ.