ಇದು ಇತರರೂ ಜನ್ಮದಿನವನ್ನು ಐಷಾರಾಮಿಯಾಗಿ ಆಚರಿಸಲು ಪ್ರೇರಣೆ ನೀಡುವಂತಿದೆ. ಶಿಷ್ಯವರ್ಗವು ಯಾವುದಾದರೊಂದು ಗ್ರಾಮವನ್ನು ಆಯ್ಕೆ ಮಾಡಿಕೊಂಡು, ಒಂದು ವಾರ ಅಲ್ಲಿ ದಂತ ತಪಾಸಣಾ ಶಿಬಿರ ಏರ್ಪಡಿಸಿ, ಉಚಿತ ಚಿಕಿತ್ಸೆ ನೀಡುವ ಮೂಲಕವೂ ಗುರುಭಕ್ತಿ ತೋರಬಹುದಿತ್ತು. ಇದರಿಂದ ಅವರ ಗುರುಗಳಿಗೆ ಅಪರಿಮಿತ ಆನಂದ ಸಿಗುತ್ತಿತ್ತೇನೋ. ಸರಳ ನಡೆ ಎಂದೆಂದಿಗೂ ಅನುಕರಣೀಯ. ರುದ್ರಮೂರ್ತಿ ಎಂ.ಜೆ., ಚಿತ್ರದುರ್ಗ