‘ಕಿಸೆ ಬರಿದು ಬೆಲೆ ಭಾರ!’ (ಪ್ರ.ವಾ., ಅ.18) ವಿಶೇಷ ವರದಿಯು ಕೊರೊನಾ ನಮ್ಮೆಲ್ಲರ ಬದುಕಿನಲ್ಲಿ ಆಡಿದ ವಿವಿಧ ಭಂಗಿಗಳ ಪ್ರತಿರೂಪದಂತಿದೆ. ಈಗ ದೇಶದಲ್ಲಿ ಸೃಷ್ಟಿಯಾಗಿರುವ ನಿರುದ್ಯೋಗ ಸಮಸ್ಯೆ, ಹಣದುಬ್ಬರ, ಬೇಡಿಕೆ ಕುಸಿತ ಇವೆಲ್ಲವುಗಳಿಂದ ಚೇತರಿಕೆ ಬಹಳ ಕಷ್ಟ ಎಂಬುದು ತಜ್ಞರ ಅಭಿಪ್ರಾಯ. ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಿದೆ, ನಿಜ. ಆದರೆ ತಮಗೆ ಅವೆಲ್ಲವೂ ಸೂಕ್ತವಾಗಿ ತಲುಪುತ್ತಿಲ್ಲ ಎಂಬುದು ಜನಸಾಮಾನ್ಯರ ಅಳಲು.