‘ಹಳ್ಳಿಗೆ ಹಿಂದಿರುಗಲು ದಾರಿ ತೋರಿ’ (ವಿಶ್ಲೇಷಣೆ, ಮೊಗಳ್ಳಿ ಗಣೇಶ್, ಪ್ರ.ವಾ., ಡಿ.11) ಲೇಖನವು ಹಳ್ಳಿಗರನ್ನು ಶೋಷಿಸುತ್ತಿರುವ ಬಂಡವಾಳಶಾಹಿ ಮತ್ತು ರಾಜಕಾರಣಿಗಳ ಕರಾಳಮುಖವನ್ನು ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಹಿನ್ನೆಲೆಯಲ್ಲಿ ಸೂಕ್ಷ್ಮವಾಗಿ ಚಿತ್ರಿಸಿದೆ. ದಿಕ್ಕೆಟ್ಟ ಹಳ್ಳಿಗಳ ಕೆಳ ಜಾತಿಗಳ ಜನರನ್ನು ಜುಜುಬಿ ದಿನಗೂಲಿಗಳಾಗಿ ಬಳಸಿ ಬಿಸಾಡುವ ನಗರದ ಕ್ರೂರ ವ್ಯವಸ್ಥೆಯನ್ನು ಲೇಖಕರು ಪರಿಣಾಮಕಾರಿಯಾಗಿ ಚಿತ್ರಿಸಿದ್ದಾರೆ.