65ನೇ ಕರ್ನಾಟಕ ರಾಜ್ಯೋತ್ಸವದ ಹೊಸ್ತಿಲಲ್ಲಿ ನಿಂತು, ಕನ್ನಡ ಶಾಲೆಗಳ ಉಳಿವಿಗಾಗಿ ಇನ್ನೂ ಹೋರಾಟ ನಡೆಸುತ್ತಿರುವುದು ವಿಷಾದಕರ. ‘ಶತಮಾನದ ಶಾಲೆಗಳಿಗೆ ಶಕ್ತಿ ತುಂಬೋಣ’ ಎಂಬ ಜಿ.ಎಸ್.ಜಯದೇವ ಹಾಗೂ ಕೃಷ್ಣಮೂರ್ತಿ ಹನೂರು ಅವರ ಲೇಖನ (ಪ್ರ.ವಾ., ನ. 2) ನೋಡಿ, ಪ್ರಸ್ತುತ ಕಾಲಘಟ್ಟಕ್ಕೆ ಈ ನಡೆ ಅಗತ್ಯವೆನಿಸಿದರೂ ಕೇವಲ ಶತಮಾನದ ಶಾಲೆಗಳಿಗೆ ಎನ್ನುವುದಕ್ಕಿಂತ ‘ಸಕಲ ಕನ್ನಡ ಶಾಲೆಗಳಿಗೆ ಜೀವ ತುಂಬಿದರೆ’ ಕನ್ನಡವು ತಾಯ್ನಾಡಿನಲ್ಲಿ ಸ್ವಾವಲಂಬಿಯಾಗಿ ನೆಲೆ ನಿಲ್ಲುತ್ತದೆ ಎನಿಸುತ್ತದೆ.