ಶಿಕ್ಷಣ, ಆರೋಗ್ಯ, ಸಂಸ್ಕಾರ ನೀಡುತ್ತಾ ನಾಡಿನ ಗೌರವವನ್ನು ಎತ್ತರಕ್ಕೆ ಕೊಂಡೊಯ್ದ ಕೀರ್ತಿ ಮಠ- ಆಶ್ರಮಗಳದ್ದು. ಹೀಗಿದ್ದರೂ ಈ ವಿದ್ವಾಂಸರು ಇಂತಹ ಆರೋಪದ ಜಾಗದಲ್ಲಿ ಮಠಗಳನ್ನು ನಿಲ್ಲಿಸಿದ್ದು ಖಂಡನೀಯ. ಒಂದು ವೇಳೆ ತಮ್ಮ ಮಾತಿಗೆಸಮರ್ಥನೆಯನ್ನು ನೀಡುವುದಾದರೆ ಅವರು ದಾಖಲೆಗಳನ್ನು ನೀಡಬೇಕು. ಇಲ್ಲವಾದರೆ ತಮ್ಮ ಹೇಳಿಕೆಯನ್ನು ಹಿಂಪಡೆದು ಸೂಕ್ತ ಸ್ಪಷ್ಟೀಕರಣ ನೀಡಲಿ.