ಹೈದರಾಬಾದ್ ಕರ್ನಾಟಕಕ್ಕೆ ಸಂವಿಧಾನದ ವಿಧಿ 371ಜೆ ಅಡಿ ವಿಶೇಷ ಸ್ಥಾನಮಾನದ ಸೌಲಭ್ಯ ದೊರೆತಾಗ, ಹರಪನಹಳ್ಳಿ ತಾಲ್ಲೂಕು ಈ ಅವಕಾಶದಿಂದ ವಂಚಿತವಾಯಿತು. ಈ ಕಾರಣದಿಂದ ತಾಲ್ಲೂಕಿನ ಜನರ ಒತ್ತಡದ ಮೇರೆಗೆ ಹರಪನಹಳ್ಳಿ ತಾಲ್ಲೂಕನ್ನು ಮತ್ತೆ ಬಳ್ಳಾರಿ ಜಿಲ್ಲೆಗೆ ಸೇರ್ಪಡೆ ಮಾಡಲಾಗಿತ್ತು.
ಪ್ರಸ್ತುತ ಬಳ್ಳಾರಿಯನ್ನು ವಿಭಜಿಸಿ ಹೊಸಪೇಟೆಯನ್ನು ಜಿಲ್ಲಾ ಕೇಂದ್ರ ಮಾಡುತ್ತಿರುವ ಸರ್ಕಾರವು ಹರಪನಹಳ್ಳಿಯನ್ನು ವಿಜಯನಗರ ಜಿಲ್ಲೆಗೆ ಸೇರ್ಪಡೆ ಮಾಡಿದೆ. ಈ ಎಲ್ಲಾ ಬದಲಾವಣೆಗಳಿಂದ ಹರಪನಹಳ್ಳಿಗೆ ಜಿಲ್ಲಾ ಕೇಂದ್ರ ಒಂದು ರೀತಿ ಮ್ಯೂಸಿಕಲ್ ಚೇರ್ನಂತೆ ಆಗಿದೆ.