ಇಷ್ಟಲಿಂಗ ಧರಿಸಿ ಪೂಜಿಸುತ್ತಾರೆ. ‘ಶಿವ’ ಇವರ ಅಧಿದೈವ. ಇವರ ಸಂಸ್ಕೃತಿ ಲಿಂಗಾಯತರ ಸಂಸ್ಕೃತಿ ರೀತಿಯಲ್ಲಿ ಇರುತ್ತದೆ. ಈಗ ಕನಕದಾಸರನ್ನು ‘ಸಾಂಸ್ಕೃತಿಕ ನಾಯಕ’ ಎಂದು ಒಪ್ಪಿಕೊಂಡ ಕುರುಬರು ಹಣೆಗೆ ‘ನಾಮ’ ಹಚ್ಚಿಕೊಂಡು ‘ಜನಿವಾರ’ ಧರಿಸಿ ‘ವಿಷ್ಣು’ವನ್ನು ಆರಾಧ್ಯ ದೈವವನ್ನಾಗಿ ಸ್ವೀಕರಿಸುತ್ತಾರೆಯೇ? ಆ ಮೂಲಕ ಶೈವ ಸಂಸ್ಕೃತಿಗೆ ತಿಲಾಂಜಲಿ ನೀಡಿ, ಸಾಂಸ್ಕೃತಿಕ ಪಲ್ಲಟಕ್ಕೆ ಒಳಗಾಗುತ್ತಾರೆಯೇ? ರೇವಣಸಿದ್ಧರನ್ನು ಹಿನ್ನೆಲೆಗೆ ಸರಿಸುತ್ತಾರೆಯೇ? ಅಥವಾ ಇಬ್ಬರನ್ನೂ ಒಟ್ಟಿಗೆ ಸ್ವೀಕರಿಸುತ್ತಾರೆಯೇ? ಕಾಲಾಯ ತಸ್ಮೈ ನಮಃ