ಜೆಡಿಎಸ್ ಮುಖಂಡ ಎಚ್.ಡಿ.ಕುಮಾರಸ್ವಾಮಿ ಮತ್ತು ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಅವರಿಬ್ಬರೂ ದಿನಬೆಳಗಾದರೆ ಮಾಡಿಕೊಳ್ಳುವ ಪರಸ್ಪರ ಆರೋಪ, ಮಾಡುತ್ತಿರುವ ಭಾಷಾ ಪ್ರಯೋಗ, ನಾನು, ನನ್ನಿಂದ ಎಂಬ ಒಣಪ್ರತಿಷ್ಠೆಯ ಪೋಸ್ಗಳನ್ನು ನೋಡುತ್ತಿದ್ದರೆ, ಹಿಂದೊಮ್ಮೆ ಇವರಿಬ್ಬರೂ ರಾಜ್ಯವಾಳಿದವರೇ ಎಂಬ ಸಂಶಯ ಮೂಡುತ್ತದೆ. ಮುಖ್ಯಮಂತ್ರಿ ಹುದ್ದೆ ನಿಭಾಯಿಸಿದ್ದವರಿಗೆ ಇರಬೇಕಾದ ತೂಕ, ವಿವೇಚನೆ, ಕನ್ನಡಿಗರಿಗೆ ನಾನು ಮೊದಲಿಗನಾಗಿ ಸೇವೆ ಸಲ್ಲಿಸಿದ್ದೆ ಎಂಬ ವಿನಯ ಇಲ್ಲದ ನಡವಳಿಕೆ ನೋಡಿದವರಲ್ಲಿ ಬೇಸರ ಉಂಟು ಮಾಡುತ್ತಿದೆ.