ಬಹಳ ಮುಖ್ಯವಾಗಿ, ಮನೆಕೆಲಸಕ್ಕೆ ಬರುವವರು ಕೊರೊನಾ ಸೋಂಕಿತರ ಮನೆಗಳಲ್ಲಿ ಅರಿವಿಲ್ಲದೆ ಕೆಲಸ ಮಾಡಿರಬಹುದು. ಆದ್ದರಿಂದ ಅವರಿಗೆ ತಿಂಗಳ ಸಂಬಳವನ್ನು ಮೊದಲೇ ನೀಡಿ ಕೆಲಸಕ್ಕೆ ಬಾರದಂತೆ ಹೇಳಬೇಕು. ನಾವು ಬೆಳಿಗ್ಗೆಯೇ ಹಾಲು, ತರಕಾರಿ, ದಿನಸಿ ಕೊಂಡು ತಂದ ನಂತರ ಮನೆಯಿಂದ ಹೊರಗೆ ಹೋಗಬಾರದು. ನಮ್ಮ ಕೆಲಸಗಳು ಇದ್ದೇ ಇರುತ್ತವೆ. ಆದರೆ ನಮ್ಮ ಆರೋಗ್ಯ ಎಲ್ಲಕ್ಕಿಂತ ಮುಖ್ಯ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು.
-ಕೆ.ಎಂ.ಜಯರಾಮಯ್ಯ, ಮೈಸೂರು