ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೃದ್ರೋಗಿಗಳ ಬವಣೆ ತಪ್ಪಿಸಿ

Last Updated 27 ಜೂನ್ 2022, 20:00 IST
ಅಕ್ಷರ ಗಾತ್ರ

ಬೆಂಗಳೂರಿನ ಜಯದೇವ ಹೃದ್ರೋಗ ಸಂಸ್ಥೆಯು ಕರ್ನಾಟಕದ ಹೆಮ್ಮೆ. ಪ್ರತಿದಿನ ಸಾವಿರಾರು ಹೊರರೋಗಿ
ಗಳನ್ನು ಪರೀಕ್ಷಿಸುವ ಈ ಸಂಸ್ಥೆ ವಾರ್ಷಿಕವಾಗಿ 3000ಕ್ಕೂ ಹೆಚ್ಚು ಹೃದಯ ಶಸ್ತ್ರಚಿಕಿತ್ಸೆಗಳನ್ನು ನಡೆಸುತ್ತದೆ. ಪ್ರತಿದಿನ ಈ ಆಸ್ಪತ್ರೆಗೆ ದೂರದ ಊರುಗಳಿಂದ ನೂರಾರು ಜನ ಹೃದಯ ಪರೀಕ್ಷೆ ಮತ್ತು ಚಿಕಿತ್ಸೆಗಾಗಿ ಬರುತ್ತಾರೆ. ಹೊರರೋಗಿ ವಿಭಾಗದಲ್ಲಿ ರೋಗ ಪರೀಕ್ಷೆಗಾಗಿ ನೊಂದಣಿ ಮಾಡಿಸಿಕೊಳ್ಳಲು ಸರತಿ ಸಾಲಿನಲ್ಲಿ ನಿಲ್ಲಬೇಕಿದೆ. ಬೆಳಗಿನ ಜಾವ 3 ಗಂಟೆಗೇ ಈ ಸರತಿ ಸಾಲು ಪ್ರಾರಂಭವಾಗುತ್ತದೆ. ಆದರೆ ಹೊರರೋಗಿ ನೋಂದಣಿ ವಿಭಾಗ ತೆರೆಯುವುದು ಬೆಳಿಗ್ಗೆ 9 ಗಂಟೆಗೆ. ಅಲ್ಲಿಯವರೆಗೂ ರೋಗಿಗಳು ಮತ್ತು ಅವರ ಕಡೆಯವರು ಈ ಸಾಲಿನಲ್ಲಿ ನಿಲ್ಲಬೇಕಿರುವುದರಿಂದ ಬಹಳಷ್ಟು ಜನರಿಗೆ ಪ್ರತಿನಿತ್ಯ ತೊಂದರೆಯಾಗುತ್ತಿದೆ. ಸರತಿ ಸಾಲಿನಲ್ಲಿ ನಿಂತವರು ಮೂತ್ರ ವಿಸರ್ಜನೆ ಮಾಡಲು ಕೂಡಾ ಹೋಗಲಾರದ ಪರಿಸ್ಥಿತಿ ಇದೆ. ಈ ತೊಂದರೆ ತಪ್ಪಿಸಬೇಕೆಂದರೆ ದೂರದ ಊರಿನಿಂದ ಬರುವವರಿಗೆ ಟೋಕನ್ ಕೊಡುವ ವ್ಯವಸ್ಥೆ ಮಾಡಬೇಕು. ಸಂಸ್ಥೆಯ ನಿರ್ದೇಶಕರು ಈ ದಿಸೆಯಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿ.

-ವಿ.ತಿಪ್ಪೇಸ್ವಾಮಿ,ಹಿರಿಯೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT