ಸರ್ಕಾರಿ ನಿಯಂತ್ರಣದ ಆಕಾಶವಾಣಿ, ದೂರದರ್ಶನಗಳನ್ನು ಪ್ರಸಾರ ಭಾರತಿ ಎಂದು ಬದಲಾಯಿಸಿದರೂ ಅವುಗಳ ವರಸೆ ಮಾತ್ರ ಬದಲಾಗಲಿಲ್ಲ. ಈಗಲೂ ಇವು 1975ರ ತುರ್ತುಪರಿಸ್ಥಿತಿ ಕಾಲದಲ್ಲಿದ್ದಂತೆ ಕೇಂದ್ರ ಸರ್ಕಾರದ ತುತ್ತೂರಿಗಳಾಗಿವೆ. ಆಕಾಶವಾಣಿ ವಾರ್ತೆಗಳಲ್ಲಿ ನರೇಂದ್ರ ಮೋದಿ, ಅಮಿತ್ ಶಾ ಅವರ ಭಾಷಣಗಳೇ ಸುದ್ದಿಗಳಾಗಿವೆ. ಹಿಂದಿ ಕೇಳಿ ಕೇಳಿ ತಲೆ ಸುತ್ತು ಬರುವಂತಾಗುತ್ತದೆ. ಇದೇ 14ರ ಬೆಳಿಗ್ಗೆ, 7.15ಕ್ಕೆ ಪ್ರಸಾರವಾಗುವ ಪ್ರದೇಶ ಸಮಾಚಾರದ ಬದಲು ‘ಹಿಂದಿ ದಿವಸ್’ ಕುರಿತ ಅಮಿತ್ ಶಾ ಅವರ ಭಾಷಣವನ್ನು ಪ್ರಸಾರ ಮಾಡಿದ್ದು ಎಷ್ಟು ಸರಿ?