ರಾಜ್ಯ ಸರ್ಕಾರಿ ನೌಕರರಿಗೆ 4ನೇ ಶನಿವಾರವೂ ರಜೆ ನೀಡಲು, ಪ್ರಸ್ತುತ ಇರುವ ಸಾಂದರ್ಭಿಕ ರಜೆಗಳನ್ನು 15ರಿಂದ 12 ದಿನಗಳಿಗೆ ಇಳಿಸಲು,ಮಹಾವೀರ, ಬಸವ, ಮಹರ್ಷಿ ವಾಲ್ಮೀಕಿ, ಕನಕಜಯಂತಿಗಳು, ಕಾರ್ಮಿಕರ ದಿನಾಚರಣೆ, ಗುಡ್ಫ್ರೈಡೆ, ಮಹಾಲಯ ಅಮಾವಾಸ್ಯೆ, ಈದ್–ಮಿಲಾದ್ಹಬ್ಬಕ್ಕೆ ನೀಡುತ್ತಿರುವ ಸಾರ್ವತ್ರಿಕ ರಜೆಗಳನ್ನು ರದ್ದುಪಡಿಸಲು ರಾಜ್ಯ ಸಚಿವ ಸಂಪುಟ ಉಪಸಮಿತಿಯು ಸರ್ಕಾರಕ್ಕೆ ಶಿಫಾರಸು ಮಾಡಿದೆ (ಪ್ರ.ವಾ., ಮೇ 29).ಈ ವಿಷಯ ಆಡಳಿತಾತ್ಮಕವೇ? ಭಾವನಾತ್ಮಕವೇ? ಸರಿಯೇ– ತಪ್ಪೇ? ಈ ಶಿಫಾರಸನ್ನು ಒಪ್ಪಬಹುದೇ ಎಂಬ ಚರ್ಚೆ ಈಗಿನ ರಾಜಕೀಯ ಹಾಗೂ ಸಾಮಾಜಿಕ ಪರಿಸ್ಥಿತಿಯಲ್ಲಿ ತರವಲ್ಲ.