‘ರೋಗೋಪಚಾರಕ್ಕಿಂತ ಮುಂಜಾಗ್ರತೆಯೇ ಉತ್ತಮ’ ಎಂಬ ನಾಣ್ನುಡಿಯಿದೆ. ಅದರಂತೆ, ಕೊರೊನಾ ಸೋಂಕು ತಡೆಗಟ್ಟಲು ಗ್ರಾಮಸ್ಥರೆಲ್ಲ ಒಗ್ಗೂಡಿ ಹಳ್ಳಿಗಳಿಗೆ ಹೊರಗಿನವರ ಪ್ರವೇಶವನ್ನು ನಿರ್ಬಂಧಿಸಿ ಪಾಳಿ ಕಾಯುತ್ತಿರುವ ಪ್ರಬುದ್ಧ ನಡೆಯು ಅನುಕರಣೀಯ. ಆದರೆ ತಿಳಿದವರು ಎನ್ನಿಸಿಕೊಂಡ ನಗರದವರು ಈ ಬಗ್ಗೆ ಉದಾಸೀನ ತೋರುತ್ತಿರುವುದು ಗಂಡಾಂತರಕ್ಕೆ ಮುನ್ಸೂಚನೆಯಾಗಿದೆ. ಕೊರೊನಾಕ್ಕೆ ಮನೆಯೇ ಮದ್ದು ಎಂಬುದನ್ನು ಜನ ಅರ್ಥಮಾಡಿಕೊಳ್ಳಬೇಕಾಗಿದೆ.
-ರುದ್ರೇಶ್ ಅದರಂಗಿ, ಬೆಂಗಳೂರು