‘ಸುಖಾಂತ್ಯ ಕಂಡ ಕೋಣದ ವಿವಾದ’ ಎಂಬ ತಲೆಬರಹವನ್ನುಳ್ಳ ವರದಿಯಲ್ಲಿ ‘ರಕ್ತದ ಮಾದರಿ ತೆಗೆದರೆ ಕೋಣವು ದೇವರ ಬಲಿಗೆ ಅರ್ಹತೆ ಪಡೆಯುವುದಿಲ್ಲ’ ಎಂಬ ಕಾರಣಕ್ಕಾಗಿ ಎರಡು ಗ್ರಾಮಗಳ ಮುಖಂಡರು ಸ್ವಾಮೀಜಿಯವರ ಮಧ್ಯಸ್ಥಿಕೆಯಲ್ಲಿ ರಾಜಿಯಾದ ಸುದ್ದಿಯನ್ನು (ಪ್ರ.ವಾ., ಅ. 19) ಓದಿದಾಗ, ‘ಸುಖಾಂತ್ಯ ಯಾರಿಗಾಯಿತು’ ಎಂಬ ಪ್ರಶ್ನೆಯು ನನ್ನನ್ನು ಕಾಡತೊಡಗಿತು.