ಮನುಕುಲದಲ್ಲಿ ಮೃಗಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಎಂದು ನಿವೃತ್ತ ಸೇನಾಧಿಕಾರಿಯೊಬ್ಬರು
ಕಳವಳ ವ್ಯಕ್ತಪಡಿಸಿದ್ದಾರೆ (ಪ್ರ.ವಾ., ಕಿಡಿನುಡಿ, ನ. 20). ಅದೇ ದಿನ ಕಾಸರಗೋಡಿನ ಮಂಜೇಶ್ವರದಲ್ಲಿ ರಸ್ತೆಯಲ್ಲಿ ನಿಂತಿದ್ದ ಬಾಲಕಿಯನ್ನು ದುರುಳನೊಬ್ಬ ನಿಷ್ಕರುಣವಾಗಿ ಹೊಡೆದು ರಸ್ತೆಗೆ ಬಿಸಾಡಿದ್ದು (ಪ್ರ.ವಾ., ನ. 18) ಸೇನಾಧಿಕಾರಿಯ ಆತಂಕಕ್ಕೆ ಪುಷ್ಟಿ ನೀಡುವಂತಿದೆ. ಹೌದು, ಇತ್ತೀಚಿನ ದಿನಗಳಲ್ಲಿ ಸೌಮ್ಯ ಮುಖವಾಡದ, ಕರಾಳ ಆಂತರ್ಯ ಹೊಂದಿರುವವರ ಸಂಖ್ಯೆ ಹೆಚ್ಚುತ್ತಿದೆ. ಮಕ್ಕಳಿಗೆ ರಕ್ಷಣೆ ಇಲ್ಲದಂತಾಗಿದೆ.