ಬಿಪಿಎಲ್ ಪಡಿತರ ಚೀಟಿಯನ್ನು ಅಕ್ರಮವಾಗಿ ಇರಿಸಿಕೊಂಡಿರುವ, ಯೆಲ್ಲೋ ಬೋರ್ಡ್ ಅಲ್ಲದ ನಾಲ್ಕು ಚಕ್ರದ ವಾಹನ ಹೊಂದಿರುವವರು ತಕ್ಷಣ ಕಾರ್ಡನ್ನು ವಾಪಸ್ ಮಾಡಿ ದಂಡ ಕಟ್ಟಬೇಕೆಂದೂ ಇಲ್ಲದಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದೂ ಆಹಾರ ಇಲಾಖೆಯಿಂದ ಇತ್ತೀಚೆಗೆ ನೋಟಿಸ್ ಹೋಯಿತು. ಕೆಲವರು ಹೆದರಿ ತಮ್ಮ ಪಡಿತರ ಚೀಟಿಗಳನ್ನು ಒಪ್ಪಿಸಿ ದಂಡ ಕಟ್ಟಿ ಬಂದರು. ಅವರದು ಎಪಿಎಲ್ ಕಾರ್ಡ್ ಆಗಿ ಪರಿವರ್ತನೆಯೂ ಆಯಿತು.
ಆದರೆ, ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಕಾರಣ ಸ್ಥಳೀಯ ಜನಪ್ರತಿನಿಧಿಗಳಲ್ಲಿ ಈ ಉಪಕ್ರಮವು ಹೆದರಿಕೆ ಮೂಡಿಸಿದ ಕಾರಣ, ‘ನೀವು ಕಾರ್ಡುಗಳನ್ನು ಸದ್ಯಕ್ಕೇನೂ ಹಿಂದಿರುಗಿಸಬೇಕಾಗಿಲ್ಲ’ ಎಂದು ಅಕ್ರಮ ಬಿಪಿಎಲ್ ಕಾರ್ಡ್ದಾರರಿಗೆ ಅಭಯ ನೀಡಿದ್ದಾರೆ. ಎಲ್ಲವೂ ವೋಟಿನ ಮಹಿಮೆ!