ರೈಲುಗಳಲ್ಲಿ ಹಿರಿಯ ನಾಗರಿಕರಿಗೆ ಪ್ರಯಾಣ ದರದಲ್ಲಿ ನೀಡಲಾಗುತ್ತಿದ್ದ ರಿಯಾಯಿತಿಯನ್ನು ಭಾರತೀಯ ರೈಲ್ವೆ ನಿಗಮವು ನಿಲ್ಲಿಸಿದ್ದು, ಇದರಿಂದ ₹ 1,500 ಕೋಟಿ ಹೆಚ್ಚುವರಿ ವರಮಾನ ಬಂದಿದೆ ಎಂದು ವರದಿಯಾಗಿದೆ. ಮೂಲತಃ ಲಾಭದಲ್ಲೇ ಇರುವ ರೈಲ್ವೆ ಇಲಾಖೆಯು ಇನ್ನೂ ಹೆಚ್ಚು ವರಮಾನ ಪಡೆಯುವ ಉದ್ದೇಶಕ್ಕೆ ಹಿರಿಯ ನಾಗರಿಕರೇ ಗುರಿಯಾಗಬೇಕೆ? ಹಾಗೆ ನೋಡಿದರೆ ಸಾರಿಗೆ ಇಲಾಖೆಯು ನಷ್ಟವನ್ನೇ ಅನುಭವಿಸುತ್ತಿದೆ. ತನ್ನ ಚಾಲಕರಿಗೆ ಸಂಬಳ ಕಡಿತ ಮಾಡಿದೆ. ಆದರೂ ಧೃತಿಗೆಡದೆ ಹಿರಿಯ ನಾಗರಿಕರಿಗೆ ಪ್ರಯಾಣ ದರದಲ್ಲಿ ರಿಯಾಯಿತಿಯನ್ನು ಮುಂದುವರಿಸಿದೆ.