ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಆಶಿಸಿರುವ ‘ಆರ್ಥಿಕತೆಯ ಗುರಿ, ಜಲ ಜೀವನ ಮಿಷನ್ ಯೋಜನೆ, ಜನಸಂಖ್ಯಾ ನಿಯಂತ್ರಣ, ಭ್ರಷ್ಟಾಚಾರ ನಿರ್ಮೂಲನ’ ಮೊದಲಾದವುಗಳೆಲ್ಲ ಉತ್ತಮ ಚಿಂತನೆಗಳೇನೋ ಹೌದು. ಆದರೆ ಇವೆಲ್ಲ ಪೂರ್ಣ ಪ್ರಮಾಣದಲ್ಲಿ ಕಾರ್ಯರೂಪಕ್ಕೆ ಬಂದು ಸಫಲವಾಗಬೇಕೆಂದರೆ, ರಾಜಕಾರಣಿಗಳು, ಅಧಿಕಾರಿಗಳು ಹಾಗೂ ಉದ್ಯಮಿಗಳಲ್ಲಿ ನೈತಿಕತೆ, ಪ್ರಾಮಾಣಿಕತೆ, ದೇಶಪ್ರೇಮದ ಗುಣಗಳು ಇರಬೇಕಾಗುತ್ತದೆ. ಪ್ರಜೆಗಳಾದ ನಾವೆಲ್ಲ ಇಚ್ಛಾಶಕ್ತಿ ಮತ್ತು ಶ್ರಮಭಾವವನ್ನು ಹೊಂದಿರಬೇಕಾಗುತ್ತದೆ. ಇವಿಲ್ಲದೆ, ಮೋದಿಯೆಂಬ ಒಂದೇ ಕೈಯಿಂದ ಚಪ್ಪಾಳೆ ಸಾಧ್ಯವಿಲ್ಲ. ಈ ಪಂಚಶೀಲ ಗುಣಗಳು ಜಾಗೃತಗೊಳ್ಳಬೇಕಾಗಿದೆ.