‘ಅಗತ್ಯ ವಸ್ತುಗಳ ಬೆಲೆ ಏರುತ್ತಿದೆ. ಜನರಿಗೆ ಮುಖ ತೋರಿಸುವುದು ಹೇಗೆ ಎಂದು ಪ್ರಧಾನಿ ಮೋದಿ ಗಡ್ಡ ಬೆಳೆಸಿಕೊಂಡು ಜನರಿಗೆ ತಮ್ಮ ಗುರುತು ಸಿಗದ ಹಾಗೆ ಮಾಡಿಕೊಳ್ಳುತ್ತಿದ್ದಾರೆ’ ಎಂಬರ್ಥದಲ್ಲಿ ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಅವರು ಪ್ರಧಾನಿ ವಿರುದ್ಧ ವ್ಯಂಗ್ಯವಾಡಿದ್ದಾರೆ (ಪ್ರ.ವಾ., ಫೆ. 22). ಸಿದ್ದರಾಮಯ್ಯ ಅವರಿಂದ ಯಾರೇ ಆದರೂ ತೂಕದ ಮಾತುಗಳನ್ನು ಮಾತ್ರ ಕೇಳಲು ಅಪೇಕ್ಷಿಸುವರೇ ಹೊರತು ಯಾರೋ ಹೊಣೆಗೇಡಿ ಆಡಬಹುದಾದ ಕ್ಷುಲ್ಲಕ, ವ್ಯಂಗ್ಯದ ಮಾತುಗಳನ್ನಲ್ಲ.