ಸೋಮವಾರ ನಡೆದ ಕರ್ನಾಟಕ ಬಂದ್ ಸಂದರ್ಭದಲ್ಲಿ ರಾಜ್ಯದ ಬಹುತೇಕ ಕಡೆ ಟೈರ್ಗಳಿಗೆ ಬೆಂಕಿ ಹಚ್ಚಿ ಪ್ರತಿಭಟನೆ ಮಾಡಿರುವುದು ವರದಿಯಾಗಿದೆ (ಪ್ರ.ವಾ., ಸೆ. 29). ಯಾವುದೇ ಪ್ರತಿಭಟನೆಯ ಬಗ್ಗೆ ನಮ್ಮ ಚಕಾರವಿಲ್ಲ. ಆದರೆ ಪ್ರತಿಭಟನೆಗಳ ರೀತಿಯ ಬಗ್ಗೆ ಕಳವಳವಿದೆ. ಪ್ರತೀ ವರ್ಷ ದೇಶದಲ್ಲಿ ವಿವಿಧ ಕಾರಣಗಳಿಗೆ ಪ್ರತಿಭಟನೆಗಳು ನಡೆಯುತ್ತಲೇ ಇರುತ್ತವೆ. ಆದರೆ ಪ್ರತಿಭಟಿಸುವವರ ಮನಃಸ್ಥಿತಿ ಮಾತ್ರ ಬದಲಾಗುತ್ತಲೇ ಇಲ್ಲ. ಮತ್ತದೇ ಹಳೆಯ ಟೈರ್ಗಳನ್ನು ರಸ್ತೆಯಲ್ಲಿ ಸುಡುವ, ಬಸ್ಸುಗಳಿಗೆ ಬೆಂಕಿ ಹಚ್ಚಿ ಶೌರ್ಯ ಮೆರೆಯುವ, ಸಾರ್ವಜನಿಕ ವಸ್ತುಗಳನ್ನು ಹಾಳು ಮಾಡುವ ಕಾರ್ಯಗಳು ನಡೆಯುತ್ತಲೇ ಇರುತ್ತವೆ.