‘ಮತಗಟ್ಟೆ ಕಾರ್ಯ ಸರಳಗೊಳಿಸಿ’ ಎಂದು ಮಧುಕುಮಾರ ಸಿ.ಎಚ್. ಆಗ್ರಹಿಸಿದ್ದಾರೆ (ಪ್ರ.ವಾ., ಏ.23). ರಾಜ್ಯದಲ್ಲಿ ಜರುಗಿದ ಎರಡು ಹಂತಗಳ ಮತದಾನದಲ್ಲಿ, ಕರ್ತವ್ಯನಿರತರಾಗಿದ್ದ ಮೂವರು ನೌಕರರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಚುನಾವಣೆ ಕಾರ್ಯದಲ್ಲಿ ಭಾಗವಹಿಸುವ ಸಿಬ್ಬಂದಿಗೆ ಚುನಾವಣಾ ಆಯೋಗವು ವಿಶೇಷ ವಿಮೆ ಮಾಡಿಸುವ ಮೂಲಕ ಅವರ ಕುಟುಂಬಗಳಿಗೆ ಸೂಕ್ತ ರಕ್ಷಣೆ ಒದಗಿಸಬೇಕು.