‘ದೇವರ ದೇವರು ಜನರ ಬೆವರು’ ಎಂಬ ಬರಗೂರು ರಾಮಚಂದ್ರಪ್ಪ ಅವರ ಲೇಖನಕ್ಕೆ ಪ್ರತಿಯಾಗಿ ವೆಂಕಟೇಶ ಮಾಚಕನೂರ ಅವರ ಪತ್ರವನ್ನು (ವಾ.ವಾ., ಮಾರ್ಚ್ 15) ಓದಿದಾಗ, ಬೆವರು ಮತ್ತು ಕಾಯಕದ ಬಗ್ಗೆ ಒಂದೆರಡು ಅನಿಸಿಕೆಗಳನ್ನು ಹೇಳಬೇಕೆನಿಸಿತು. ಒಬ್ಬ ವ್ಯಕ್ತಿ ಪಿಂಚಣಿಗೆ ಅರ್ಹನಾಗಬೇಕಾದರೆ ಹಗಲು ರಾತ್ರಿ ಕಣ್ಣಲ್ಲಿ ಎಣ್ಣೆ ಹಾಕಿಕೊಂಡು ಓದಿ, ಪದವಿ ಪಡೆದು, ಸ್ಪರ್ಧಾತ್ಮಕವಾಗಿ ಪೈಪೋಟಿಯಲ್ಲಿ ಉದ್ಯೋಗ ಪಡೆದು, ಹಲವು ಸಂದರ್ಭಗಳಲ್ಲಿ ಕುಟುಂಬದಿಂದ ದೂರ ಉಳಿಯಬೇಕಾಗಿ ಬಂದು, ಕೆಲವನ್ನೆಲ್ಲ ತ್ಯಾಗ ಮಾಡಿ, ಹಲವಾರು ಒತ್ತಡಗಳ ನಡುವೆಯೂ ಸಮತೋಲಿತವಾಗಿ ನೌಕರಿ ಮಾಡಬೇಕಾಗುತ್ತದೆ. ಕೆಲಸದ ಒತ್ತಡ, ನಿರೀಕ್ಷೆ, ವೈಫಲ್ಯ ಇವೆಲ್ಲ ಉದ್ಯೋಗಿಗಳ ಆರೋಗ್ಯವನ್ನೂ ಹಾಳು ಮಾಡುವುದಿದೆ.