ಕರ್ನಾಟಕದಲ್ಲಿ ಕನ್ನಡ ನುಡಿ ಅನೇಕ ಕಾರಣಗಳಿಂದಾಗಿ ಅವನತಿಯ ಹಾದಿ ಹಿಡಿದಿದೆ. ‘ಸಾಯುತಿದೆ ನಿಮ್ಮ ನುಡಿ ಓ ಕನ್ನಡದ ಕಂದಗಳಿರಾ’, ‘ಹೊರ ನುಡಿಯ ಹೊರೆಯಿಂದ ಕುಸಿದು ಕುಗ್ಗಿ...’ ಎಂಬ ಕುವೆಂಪು ಅವರ ಪದಗಳು ಇಂದಿಗೂ ಪ್ರಸ್ತುತ ಎಂಬಂತಿವೆ. ಇಂಗ್ಲಿಷ್ ಮಾಧ್ಯಮ ಶಾಲೆಗಳ ವಿರುದ್ಧದ ಸ್ಪರ್ಧೆಯಲ್ಲಿ ಕನ್ನಡ ಶಾಲೆಗಳುಮೂಲೆಗುಂಪಾಗಿರುವಾಗ, ಹೊರ ನುಡಿಯ ಹೊರೆ ಹೇರುವ ತವಕ ಸಹಿಸಲು ಅಸಾಧ್ಯ.