ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದು, ಸಭ್ಯರ ಆಟವೇ?

ಅಕ್ಷರ ಗಾತ್ರ

ಏಕದಿನ ಮತ್ತು ಟ್ವೆಂಟಿ–20 ಕ್ರಿಕೆಟ್ ಪಂದ್ಯಗಳು ಅನಾವರಣವಾಗುವತನಕ ಕ್ರಿಕೆಟ್‌ ಬಹುಮಟ್ಟಿಗೆ ‘ಸಭ್ಯರ ಆಟ’ ಎಂದೇ ಕರೆಸಿಕೊಳ್ಳುತ್ತಿತ್ತು. ಆಸ್ಟ್ರೇಲಿಯಾದ ಕೆರಿ ಪ್ಯಾಕರ್ ಮತ್ತು ಭಾರತದ ಲಲಿತ್ ಮೋದಿ ಅವರು ಕ್ರಿಕೆಟ್‌ನ ವಿನ್ಯಾಸವನ್ನು ಬದಲಿಸಿ, ಅದನ್ನು ವಾಣಿಜ್ಯೀಕರಣಗೊಳಿಸಿ, ಅದಕ್ಕೆ ಪಂಚತಾರಾ ಮೆರುಗು, ಉದ್ಯಮಿಗಳು- ರಾಜಕಾರಣಿಗಳ ನಂಟು, ಬೆಡಗು– ಬಿನ್ನಾಣ ಜೋಡಿಸಿದ ಮೇಲೆ, ಅದು ತನ್ನ ‘ಸಭ್ಯತನ’ವನ್ನು ಕಳೆದುಕೊಂಡಿದೆ.

ಈ ದಿನಗಳಲ್ಲಿ ಪಂದ್ಯವನ್ನು ಎಷ್ಟೇ ಪ್ರಾಮಾಣಿಕವಾಗಿ ಆಡಿದರೂ, ಪಂದ್ಯದ ಸೋಲು-ಗೆಲುವಿನಲ್ಲಿ ಅದನ್ನು ಕಾಣದಿರುವ ಸ್ಥಿತಿ ಉಂಟಾಗಿದೆ. ಶತಕಗಳ ಇತಿಹಾಸ ಇರುವ ಈ ಅಂತರರಾಷ್ಟ್ರೀಯ ಆಟ ಇಂತಹ ದುರವಸ್ಥೆಗೆ ಇಳಿಯುತ್ತದೆ ಎಂದು ಯಾರೂ ಭಾವಿಸಿರಲಿಲ್ಲ.

ರಮಾನಂದ ಶರ್ಮಾ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT