ಏಕದಿನ ಮತ್ತು ಟ್ವೆಂಟಿ–20 ಕ್ರಿಕೆಟ್ ಪಂದ್ಯಗಳು ಅನಾವರಣವಾಗುವತನಕ ಕ್ರಿಕೆಟ್ ಬಹುಮಟ್ಟಿಗೆ ‘ಸಭ್ಯರ ಆಟ’ ಎಂದೇ ಕರೆಸಿಕೊಳ್ಳುತ್ತಿತ್ತು. ಆಸ್ಟ್ರೇಲಿಯಾದ ಕೆರಿ ಪ್ಯಾಕರ್ ಮತ್ತು ಭಾರತದ ಲಲಿತ್ ಮೋದಿ ಅವರು ಕ್ರಿಕೆಟ್ನ ವಿನ್ಯಾಸವನ್ನು ಬದಲಿಸಿ, ಅದನ್ನು ವಾಣಿಜ್ಯೀಕರಣಗೊಳಿಸಿ, ಅದಕ್ಕೆ ಪಂಚತಾರಾ ಮೆರುಗು, ಉದ್ಯಮಿಗಳು- ರಾಜಕಾರಣಿಗಳ ನಂಟು, ಬೆಡಗು– ಬಿನ್ನಾಣ ಜೋಡಿಸಿದ ಮೇಲೆ, ಅದು ತನ್ನ ‘ಸಭ್ಯತನ’ವನ್ನು ಕಳೆದುಕೊಂಡಿದೆ.