15ನೆಯ ಹಣಕಾಸು ಆಯೋಗವು ಕರ್ನಾಟಕಕ್ಕೆ 2020-21ನೇ ಸಾಲಿಗೆ ವಿಶೇಷ ಅನುದಾನ ₹ 5,495 ಕೋಟಿ ಶಿಫಾರಸು ಮಾಡಿತ್ತು. ಕೇಂದ್ರ ಸರ್ಕಾರವು ಇದನ್ನು ನೀಡಲಿಲ್ಲ. ಒಕ್ಕೂಟ ತೆರಿಗೆ ರಾಶಿಯಲ್ಲಿ ರಾಜ್ಯಕ್ಕೆ 2019-20ರಲ್ಲಿ ₹ 30,919 ಕೋಟಿ ದೊರೆತಿತ್ತು. ಇದು 2022-23ರಲ್ಲಿ ₹ 29,783 ಕೋಟಿಗಿಳಿದಿದೆ. ಇದೇ ರೀತಿ 2019- 20ರಲ್ಲಿ ಒಕ್ಕೂಟ ಸರ್ಕಾರವು ರಾಜ್ಯಕ್ಕೆ ನೀಡಿದ್ದ ಸಹಾಯಾನುದಾನ ₹ 19,982 ಕೋಟಿ.ಇದು 2022-23ರಲ್ಲಿ ₹ 17,281 ಕೋಟಿಗಿಳಿದಿದೆ.