ಮಾಲೂರು ತಾಲ್ಲೂಕಿನ ಉಳ್ಳೇರಹಳ್ಳಿಯಲ್ಲಿ ಗ್ರಾಮ ದೇವತೆಯ ಗುಜ್ಜುಕೋಲು ಮುಟ್ಟಿದ ಪರಿಶಿಷ್ಟ ಸಮುದಾಯದ ಬಾಲಕನನ್ನು ಥಳಿಸಿ, ದಂಡ ವಿಧಿಸಲು ಮುಂದಾಗಿದ್ದು ಅಕ್ಷಮ್ಯ. ದಲಿತರ ರಕ್ಷಣೆಗೆ ಕಾನೂನು ಬಲ ಇದ್ದರೂ ಅದನ್ನು ಎಲ್ಲೆಡೆ ನಿರ್ಲಕ್ಷಿಸಲಾಗುತ್ತಿದೆ. ಈ ಮಾತು ದಲಿತರಿಗಷ್ಟೇ ಅಲ್ಲ ಬಂಜಾರರು, ಕೊರಮ, ಕೊರಚ, ಅಲೆಮಾರಿಗಳಿಗೂ ಅನ್ವಯಿಸುತ್ತದೆ.