ರಾಜ್ಯದ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರ ಬೇನಾಮಿ ಆಸ್ತಿ ಜಪ್ತಿ ಮಾಡಲುಆದಾಯ ತೆರಿಗೆ ಇಲಾಖೆ ಮುಂದಾಗಿರುವುದು (ಪ್ರ.ವಾ., ಮಾರ್ಚ್ 24) ಸ್ವಾಗತಾರ್ಹ. ಆದರೆ, ಲೋಕಸಭಾ ಚುನಾವಣೆ ಹೊಸ್ತಿಲಲ್ಲಿರುವಾಗ ನಡೆದಿರುವ ಈ ಕ್ರಮ ಜನರಿಗೆ ಕೆಟ್ಟ ಸಂದೇಶವನ್ನು ನೀಡುತ್ತದೆ. ಅಷ್ಟಕ್ಕೂ ಬಹುತೇಕ ರಾಜಕೀಯ ನಾಯಕರು, ಅಷ್ಟೇ ಏಕೆ ಉದ್ಯಮಿಗಳು, ಅಧಿಕಾರಿಗಳು ಸಹ ಬೇನಾಮಿ ಆಸ್ತಿ ಹೊಂದಿರುವುದು ನಗ್ನಸತ್ಯ. ಹೀಗಾಗಿ ಇದು ಚುನಾವಣೆಯ ಸಂದರ್ಭಕ್ಕಷ್ಟೇ ಸೀಮಿತವಾಗದೆ, ಸಾರ್ವಕಾಲಿಕವಾಗಿ ಕೈಗೊಳ್ಳಬೇಕಾದ ಅಗತ್ಯ ಕ್ರಮ.