ಬೆಂಗಳೂರು– ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಇರುವ ಜಾನಪದ ಲೋಕ, ಎಚ್.ಎಲ್. ನಾಗೇಗೌಡರ ಕನಸಿನ ಕೂಸು. ಜಾನಪದ ಕಲೆಗಳ ಪರಿಚಯ, ಅವುಗಳ ಮಂಥನ, ವಸ್ತುಸಂಗ್ರಹಾಲಯದ ಜೊತೆಗೆ, ಕರ್ನಾಟಕದ ಸಾಂಸ್ಕೃತಿಕ ಸಂಪತ್ತಿನ ಜನಪದ ಕಲಾವೈಭವವನ್ನು ಇಂದಿನ ಪೀಳಿಗೆಗೆ ಪರಿಚಯಿಸುವ, ಪ್ರದರ್ಶಿಸುವ ಉದ್ದೇಶದಿಂದ ಅದನ್ನು ಸ್ಥಾಪಿಸಲಾಗಿದೆ.