ಕನ್ನಡ ಅಭಿವೃದ್ಧಿ ಪ್ರಾದಿಕಾರದ ನಿಯೋಗದಲ್ಲಿನ ಕೆಲವು ಸದಸ್ಯರು ದೆಹಲಿಯ ಕರ್ನಾಟಕ ಭವನದಲ್ಲಿ ಮದ್ಯಪಾನ ಮಾಡಿ ಜೋರಾಗಿ ಮಾತನಾಡುತ್ತಾ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಕೆಂಗಣ್ಣಿಗೆ ಗುರಿಯಾಗಿರುವ ಸುದ್ದಿ ಓದಿ (ಪ್ರ.ವಾ., ಫೆ. 8) ತುಂಬಾ ಬೇಸರವಾಯಿತು. ಚಿಂತಕರೇ ಈ ರೀತಿ ನಡೆದುಕೊಂಡರೆ, ನಮ್ಮ ರಾಜ್ಯದಲ್ಲಿ ಮದ್ಯಪಾನ ನಿಷೇಧ ಮರೀಚಿಕೆಯೇ ಸರಿ. ರಾಜ್ಯದಲ್ಲಿ ಕನ್ನಡ ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕೋರಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲು ದೆಹಲಿಗೆ ಹೋದ ಇವರು ತಾವೇ ಚರ್ಚೆಯ ವಿಷಯವಾಗಿದ್ದು ವಿಷಾದನೀಯ.