ಬೆಂಗಳೂರಿನಲ್ಲಿ ಬಸವಣ್ಣನವರ ಪ್ರತಿಮೆಯ ಕೆಳಗೆ ಕನ್ನಡ, ಇಂಗ್ಲಿಷ್ ಜೊತೆಗೆ ಹಿಂದಿಯಲ್ಲಿದ್ದ ಬರಹವನ್ನು ಬಣ್ಣದಿಂದ ಅಳಿಸಿಹಾಕಿರುವ ಬಗ್ಗೆ ಸತ್ಯಬೋಧ ಅವರು ಪ್ರಸ್ತಾಪಿಸಿದ್ದಾರೆ (ವಾ.ವಾ., ಆ. 19). ಅವರ ಅಭಿಪ್ರಾಯಗಳು ಒಪ್ಪತಕ್ಕವೇ ಆದರೂ ಕರ್ನಾಟಕದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಹಿಂದಿಯ ಬಗ್ಗೆ ಆಕ್ರೋಶ ಉಂಟಾಗುವ ಸನ್ನಿವೇಶ ಏಕೆ ನಿರ್ಮಾಣವಾಗಿದೆ ಎನ್ನುವುದನ್ನು ಸ್ವಲ್ಪ ವಿಚಾರ ಮಾಡಬೇಕಾಗುತ್ತದೆ.