ಕರ್ನಾಟಕದಲ್ಲೇ ತಮಿಳು, ತೆಲುಗು, ಹಿಂದಿ ಭಾಷೆಯವರು ತಮ್ಮ ಭಾಷೆಯಲ್ಲಿ ಮಾತನಾಡಿದರೆ ಕನ್ನಡಿಗರು ಅವರವರದೇ ಭಾಷೆಯಲ್ಲಿ ಉತ್ತರಿಸುತ್ತಾರೆ. ಅವರಲ್ಲಿ ಕನ್ನಡ ಮಾತನಾಡುವ ಗೋಜಿಗೂ ಹೋಗುವುದಿಲ್ಲ. ರಾಷ್ಟ್ರೀಕೃತ ಬ್ಯಾಂಕುಗಳ ಕೆಲವು ಶಾಖೆಗಳಲ್ಲಿ ಕನ್ನಡ ಬಾರದ, ಹಿಂದಿಯನ್ನೇ ಮಾತನಾಡುವ ಹಲವು ಉದ್ಯೋಗಿಗಳಿದ್ದಾರೆ. ಗ್ರಾಹಕರೊಂದಿಗೆ ಅವರು ಹಿಂದಿಯಲ್ಲೇ ಮಾತನಾಡುತ್ತಾರೆ. ಕನ್ನಡಿಗರು ಬೇರೆಯವರ ಸಹಾಯ ಪಡೆದು ಅವರ ಕೆಲಸ ಮಾಡಿಕೊಂಡು ಬರಬೇಕು. ಇದು ಕನ್ನಡಿಗರ ವ್ಯಥೆಯ ಕಥೆ. ಕನ್ನಡ ಭಾಷೆ ಬೆಳವಣಿಗೆಗೆ ವಿವಿಧ ರೀತಿಯಲ್ಲಿ ಪ್ರೋತ್ಸಾಹ ನೀಡುವ ಅಗತ್ಯವಿದೆ. ಎಂಥ ಸವಾಲು ಎದುರಾದರೂ ಕನ್ನಡ ಕಲಿಕೆಯನ್ನು ಕಡ್ಡಾಯ ಮಾಡುವುದರಿಂದ ಮಾತ್ರ ನಮ್ಮ ಭಾಷೆಯನ್ನು ಉಳಿಸಿಕೊಳ್ಳಲು ಸಾಧ್ಯ.