ಕನ್ನಡಿಗರೆಲ್ಲರೂ ಬಹುಪಾಲು ತಮ್ಮೆಲ್ಲ ವ್ಯವಹಾರಗಳನ್ನು ಕನ್ನಡದಲ್ಲಿಯೇ ನಡೆಸಬೇಕು. ಉದಾಹರಣೆಗೆ, ಮಾತನಾಡುವುದು, ಅರ್ಜಿ ಬರೆಯುವುದು, ಪತ್ರ ವ್ಯವಹಾರ, ಬ್ಯಾಂಕ್ನಲ್ಲಿ ಚೆಕ್– ಚಲನ್ಗಳನ್ನು ಬರೆಯುವುದು, ಇ– ಮೇಲ್, ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡದ ಬಳಕೆ, ಮನೆಗೆ ಕನ್ನಡ ದಿನಪತ್ರಿಕೆ ತರಿಸಿಕೊಳ್ಳುವುದು, ಖಾಸಗಿ ಕಚೇರಿಗಳಲ್ಲೂ ನಮ್ಮ ಭಾಷೆಯನ್ನೇ ಬಳಸುವುದು- ಹೀಗೆಲ್ಲ ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲ ನಯವಾಗಿಯೇ ಕನ್ನಡವನ್ನು ಆತ್ಮವಿಶ್ವಾಸದಿಂದ ಬಳಸಬೇಕು. ಆಗ ತನಗೆ ತಾನೇ ಇತರರೂ ಕನ್ನಡ ಕಲಿಯುವಂತೆ ಆಗುತ್ತದೆ. ಅದಕ್ಕೆ ತಮಿಳುನಾಡು ಒಳ್ಳೆಯ ಉದಾಹರಣೆಯಾದೀತು!